
2ಕೋಟಿ ವಂಚನೆ ಪ್ರಕರಣ ಆರೋಪಿ ಶರವಣ ಅಂದರ್
-ಮನೆ ಮಾರುವುದಾಗಿ ಹಲವರಿಂದ ಹಣ ಪಡೆದು ಅಗ್ರಿಮೆಂಟ್ ಬಳಿಕ, ನಾಪತ್ತೆ ಪ್ರಕರಣ ಭೇದಿಸಿದ ಪೊಲೀಸರು
ಕೊಳ್ಳೇಗಾಲ. ಡಿ.19. ಹಲವು ಮಂದಿಯಿಂದ ಮನೆ ಮಾರುವುದಾಗಿ ಅಗ್ರಿಮೆಂಟ್ ಹಾಕಿಸಿಕೊಂಡು ಎರಡು ಕೋಟಿಗೂ ಹೆಚ್ಚು ಹಣವನ್ನು
ಪಡೆದು ಕಳೆದ ಏಳಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೋವ೯ನನ್ನು ಬಂಧಿಸುವಲ್ಲಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ
ಶರವಣ್ ಎಂಬಾತ ಬಂಧಿತ ಆರೋಪಿ. ಈತ ಕೊಳ್ಳೇಗಾಲದ ದಕ್ಷಿಣ ಬಡಾವಣೆಯಲ್ಲಿದ್ದ ಮನೆಯೊಂದನ್ನು ನಿಮಗೆ ಮಾರಾಟ ಮಾಡುತ್ತೆನೆ ಎಂದು
ಮಾಂಬಳ್ಳಿ ನಾಗರಾಜು , ನಿವೃತ್ತ ಯೋಧ ವಿಶ್ವನಾಥ್, ಮಾರುಕಟ್ಟೆ ಕೆ.ಕೆ.ಮೂರ್ತಿ, ಶಿವಕುಮಾರ್ ಸೇರಿದಂತೆ ಹಲವರಿಂದ ಅಗ್ರಿಮೆಂಟ್ ಹಾಕಿಕೊಂಡು 15ಕ್ಕೂ ಅಧಿಕ
ಮಂದಿಯಿಂದ 2ಕೋಟಿಗೂ ಅಧಿಕ ಹಣ ಪಡೆದು ಬಳಿಕ ಮತ್ತೊಬ್ಬರಿಗೆ ಮನೆ ಮಾರಾಟ ಮಾಡಿ ನಾಪತ್ತೆಯಾಗಿದ್ದ ಎನ್ನಲಾಗಿದೆ. ಈತ ನಗರಸಭೆ ಮಾಜಿ ಸದಸ್ಯ ಕೆ. ಕೆ ಮೂತಿ೯, ನಾಗರಾಜು ಎಂಬುವರಿಂದ ಆರು ಲಕ್ಷ ಸೇರಿದಂತೆ ಹದಿನೈದಕ್ಕೂ ಅಧಿಕ ಮಂದಿಗೆ ಲಕ್ಷಾಂತರ ಪಡೆದು ಅಂದಾಜು 2ಕೋಟಿ ಹಣ ಪಡೆದು ಮನೆಯನ್ನು ಬೇರೊಬ್ಬರಿಗೆ ಮಾರಾಟ ಮಾಡಿ ನಾಪತ್ತೆಯಾಗಿದ್ದ.
ಈಸಂಬಂಧ ನಾಗರಾಜು ಎಂಬುವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ನೀಡಿದ್ದರು.
ಹಲವು ದೂರಿನ ಹಿನ್ನೆಲೆ . ಈಸಂಬಂಧ ಈತನ ವಿರುದ್ದ ಪಟ್ಟಣ ಮತ್ತು ಗ್ರಾಮಾಂತರ ಠಾಣೆಯಲ್ಲಿ
ಪ್ರಕರಣ ದಾಖಲಾಗಿತ್ತು.. ಆದರೆ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಪತ್ತೆ ಪೊಲೀಸರಿಗೆ ಸವಾಲಾಗಿತ್ತು. ಈತ ಪ್ರಕರಣ ಸಂಬಂಧ ನ್ಯಾಯಾಲಯಕ್ಕೂ ಹಾಜರಾಗಿರಲಿಲ್ಲ ಎನ್ನಲಾಗಿದ್ದು ಬೆಂಗಳೂರಿನ ಜೆ ಪಿ ನಗರದಲ್ಲಿ
ಮಳಿಗೆಯೊಂದನ್ನ ಬಾಡಿಗೆ ಪಡೆದು ವ್ಯಾಪಾರ ಮಾಡುತ್ತಿದ್ದನ್ನ ಗಮನಿಸಿದ ಮಾಜಿ ಸೈನಿಕರೊಬ್ಬರು ನೀಡಿದ ಸುಳಿವಿನ ಮೇರೆಗೆ ಗ್ರಾಮಾಂತರ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.
- ನಿಂಪುವಾರ್ತೆ
![/* Change button hover color to red */
button:hover,
.wp-block-button__link:hover,
input[type="submit"]:hover {
background-color: red !important;
color: #fff !important; /* Makes text white for contrast */
}](https://rapower28.com/wp-content/uploads/2025/08/WhatsApp-Image-2025-08-23-at-7.28.55-AM-2-1024x454.jpeg)












