
ನಾಡಪ್ರಭು ಕೆಂಪೇಗೌಡರ ನಾಮಫಲಕ ಹಾಗೂ ಭಾವಚಿತ್ರ ಅನಾವರಣ
ಕೊಳ್ಳೇಗಾಲ ತಾಲ್ಲೂಕಿನ ಕಾಮಗೆರೆ ಗ್ರಾಮದ ಒಕ್ಕಲಿಗರ ಅಂಗಡಿಮನೆ ಬೀದಿಯಲ್ಲಿ ನಾಡಪ್ರಭು ಕೆಂಪೇಗೌಡರ ಹೆಬ್ಬಾಗಿಲಿನ ಎರಡನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಹಾಗೂ ನಾಡಪ್ರಭು ಕೆಂಪೇಗೌಡರ ಬಳಗದ ವತಿಯಿಂದ ಕೆಂಪೇಗೌಡರ ನಾಮಫಲಕ ಮತ್ತು ಭಾವಚಿತ್ರ ಅನಾವರಣ ಮಾಡಲಾಯಿತು.
ಕೆಂಪೇಗೌಡರ ಭಾವಚಿತ್ರಕ್ಕೆ ಗ್ರಾಮದ ಮುಖಂಡರಾದ ಕುಮಾರ್ ಗೌಡರವರು ಪುಷ್ಪಾರ್ಚನೆ ಮಾಡಿ ನಾಡಿಗೆ ಕೆಂಪೇಗೌಡರು ನೀಡಿರುವ ಕೊಡುಗೆಗಳು ಮಾಡಿರುವ ಸಾಧಾರಣೆ ಕೆಲಸಗಳನ್ನು ಸ್ಮರಿಸಿದರು.
ನಾಡಪ್ರಭು ಕೆಂಪೇಗೌಡರ ಹೆಬ್ಬಾಗಿಲಿನ ನಿರ್ಮಾತೃಗಳಾದ ಗ್ರಾಮದ ಮಾನಸಿ ಶಿಕ್ಷಣ ಸಂಸ್ಥೆಯ ಬಾಬು.ಕೆ ರವರನ್ನು ಕೆಂಪೇಗೌಡರ ಬಳಗದ ವತಿಯಿಂದ ಅಂಗಡಿ ಮನೆ ಬೀದಿಯ ನಿವಾಸಿಗಳಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾಬುರವರು ನಾಡಪ್ರಭು ಕೆಂಪೇಗೌಡರ ಉದಾತ್ತ ವ್ಯಕ್ತಿತ್ವ ಜನಪರ ಕಾಳಜಿ ಆದರ್ಶಗಳನ್ನು ಯುವಜನತೆ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಸಿ ರಾಜು, ಕೃಷ್ಣಗೌಡ, ರವಿ, ಮೆಡಿಕಲ್ ಮಾದೇಶ, ಡಿ ಮಾದೇಶ, ಲಿಖಿತ್, ಪ್ರೀತಮ್, ಏರ್ಟೆಲ್ ನಾಗೇಂದ್ರ, ಗೋಪಾಲ್. ಕೆಂಪೇಗೌಡ ಬಳಗದ ಪದಾಧಿಕಾರಿಗಳು ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
- ನಿಂಪುವಾರ್ತೆ
![/* Change button hover color to red */
button:hover,
.wp-block-button__link:hover,
input[type="submit"]:hover {
background-color: red !important;
color: #fff !important; /* Makes text white for contrast */
}](https://rapower28.com/wp-content/uploads/2025/08/WhatsApp-Image-2025-08-23-at-7.28.55-AM-2-1024x454.jpeg)













