/* Change button hover color to red */
button:hover,
.wp-block-button__link:hover,
input[type="submit"]:hover {
    background-color: red !important;
    color: #fff !important; /* Makes text white for contrast */
}

  • Home
  • ಜಿಲ್ಲೆ
  • ಕೊಳ್ಳೇಗಾಲ : ಗಾಯಾಳು ಭೀಮನಗರ ದೊಡ್ಡ ಯಜಮಾನರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ದೊಡ್ಡತನ ಮೆರೆದ ಮಾಜಿ ಸಚಿವ ಎನ್.ಮಹೇಶ್
Image

ಕೊಳ್ಳೇಗಾಲ : ಗಾಯಾಳು ಭೀಮನಗರ ದೊಡ್ಡ ಯಜಮಾನರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ದೊಡ್ಡತನ ಮೆರೆದ ಮಾಜಿ ಸಚಿವ ಎನ್.ಮಹೇಶ್

ಕೊಳ್ಳೇಗಾಲ : ಕೊಳ್ಳೇಗಾಲ ಪಟ್ಟಣದ ಭೀಮನಗರ ದೊಡ್ಡ ಯಜಮಾನ ಹಾಗೂ ಪತ್ರಕರ್ತ ಚಿಕ್ಕ ಮಾಳಿಗೆ ಮೇಲೆ ಪಾನಮತ್ತ ಯುವಕನೋರ್ವ ಹಲ್ಲೆ ನಡೆಸಿದ ಪರಿಣಾಮ ಗಾಯಾಳು ಪತ್ರಕರ್ತ ಚಿಕ್ಕಮಾಳಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಶುಕ್ರವಾರ ರಾತ್ರಿ ಚಿಕ್ಕಮಾಳಿಗೆ ತಮ್ಮ ಪತ್ನಿ ಜೊತೆಗೆ ಹೊಟೆಲ್ ವೊಂದರಲ್ಲಿ ತಿಂಡಿ ತಿನ್ನಲು ಹೋಗಿದ್ದರು. ಈ ವೇಳೆ ಅಲ್ಲೇ ಇದ್ದ ಪಾಳ್ಯ ಗ್ರಾಮದ ರವಿನಾಯ್ಕ ಎಂಬಾತ ಪಾನಮತ್ತನಾಗಿ ನಾನು ಭೀಮನಗರದವನು ಎಂದು ಹೇಳಿ ಹೋಟೆಲ್ ಮಾಲೀಕರ ಜೊತೆಗೆ ವಾಗ್ವಾದಕ್ಕಿಳಿದಿದ್ದ.

ಇದನ್ನು ಗಮನಿಸಿದ ಭೀಮನಗರ ದೊಡ್ಡ ಯಜಮಾನ ಚಿಕ್ಕಮಾಳಿಗೆ ಅವರು, ನಮ್ಮ ಬೀದಿ ಹೆಸರು ಏಕೆ ಹೇಳುತ್ತೀಯ ಎಂದು ಪ್ರಶ್ನಿಸಿದ್ದಾರೆ.

ಇದರಿಂದ ಕುಪಿತನಾದ ಪಾನಮತ್ತ ಯುವಕ ಚಿಕ್ಕಮಾಳಿಗೆ ಅವರ ಕೈಯನ್ನು ಬಲವಾಗಿ ತಿರುವಿ ಕೆಳಕ್ಕೆ ಕೆಡವಿದ್ದಾನೆ. ಈ ಘಟನೆಯಲ್ಲಿ ಚಿಕ್ಕಮಾಳಿಗೆ ಅವರ ಕೈ ಮೂಳೆ ಮುರಿದಿದೆ. ತುಂಬಾ ನೋವಿನಿಂದ ಬಳಲಿದ ಅವರು, ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ನಂತರ ಕಾಮಗೆರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆ ಪಡೆದರು.

ಜಿಲ್ಲಾಧ್ಯಕ್ಷ ದೇವರಾಜು ಕಪ್ಪಸೋಗೆ ಭೇಟಿ : ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ ಅವರು‌ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಪತ್ರಕರ್ತ ಚಿಕ್ಕಮಾಳಿಗೆ ಆರೋಗ್ಯ ವಿಚಾರಿಸಿದರು. ಈ ಸಂಧರ್ಭದಲ್ಲಿ ಜಿಲ್ಲಾ ಸಮಿತಿ‌ ಸದಸ್ಯರು, ಹನೂರು ತಾಲ್ಲೂಕು ಪತ್ರಕರ್ತರ ಸಂಘದ ಗೌರವಾಧ್ಯಕ್ಷ ದೇವರಾಜನಾಯ್ಡು, ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷ ಡಿ.ಸಿದ್ದರಾಜು ಮತ್ತಿತರರು ಇದ್ದರು.

ದೊಡ್ಡ ಯಜಮಾನರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ದೊಡ್ಡತನ ಮೆರೆದ ಮಾಜಿ ಸಚಿವ ಎನ್.ಮಹೇಶ್ :
ಭೀಮನಗರದ ದೊಡ್ಡ ಯಜಮಾನರು ಆಗಿರುವ ಪತ್ರಕರ್ತ ಚಿಕ್ಕಮಾಳಿಗೆ ಅವರನ್ನು ಮಾಜಿ ಸಚಿವ ಎನ್.ಮಹೇಶ್ ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿ ದೊಡ್ಡತನ ಮೆರೆದಿದ್ದಾರೆ.

ಮಾಜಿ ಸಚಿವ ಎನ್.ಮಹೇಶ್ ಅವರು ಕಳೆದ ಲೋಕಸಭಾ ಚುನಾವಣಾ ವೇಳೆ ಕೊಳ್ಳೇಗಾಲ ಪಟ್ಟಣದ ಭೀಮನಗರ ಜನರ ಮೇಲೆ ಅನಪೇಕ್ಷಿತ ಪದ ಬಳಸಿ ಮಾತನಾಡಿದ್ದರು. ಇದು ಭೀಮನಗರ ನಿವಾಸಿಗಳು ಮತ್ತು ಯಜಮಾನರನ್ನು ಕೆರಳಿಸಿತ್ತು.

ಆಗಲೂ ಸಹ ಚಿಕ್ಕಮಾಳಿಗೆ ಅವರೇ ದೊಡ್ಡ ಯಜಮಾನರಾಗಿದ್ದರು, ಭೀಮನಗರ ಜನರ ಕ್ಷಮೆ ಕೇಳುವವರೆಗೆ ಮಾಜಿ ಸಚಿವ ಎನ್.ಮಹೇಶ್ ಅವರನ್ನು ಭೀಮನಗರ ಬಡಾವಣೆಗೆ ಯಾವುದೇ ಕಾರ್ಯಕ್ರಮಕ್ಕೂ ಆಹ್ವಾನಿಸ ಬಾರದೆಂದು ನಿರ್ದಾರ ಮಾಡಲಾಗಿತ್ತು, ಇದೇ ಕಾರಣಕ್ಕೆ ಭೀಮನಗರ ವತಿಯಿಂದ ಆಯೋಜಿಸಲಾಗಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮಕ್ಕೂ ಆಹ್ವಾನ ನೀಡಿರಲಿಲ್ಲ.

ಈ ಘಟನೆಗಳಿಂದ ಸ್ವತಃ ಮಾಜಿ ಸಚಿವ ಎನ್.ಮಹೇಶ್ ಅವರು ನೊಂದಿದ್ದರು, ಆದರೂ ಸಹ ಭೀಮನಗರ ದೊಡ್ಡ ಯಜಮಾನರು ಆದ ಚಿಕ್ಕಮಾಳಿಗೆ ಅವರು, ಪಾನಮತ್ತ ಯುವಕನಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ವಿಷಯ ತಿಳಿದು ಭೇಟಿಯಾಗಿ ಆರೋಗ್ಯ ವಿಚಾರಿಸಿ ದೈರ್ಯ ತುಂಬಿದ್ದಾರೆ.

ಈ ಮೂಲಕ ಮಾಜಿ ಸಚಿವ ಎನ್.ಮಹೇಶ್ ಅವರು ತಮ್ಮ ದೊಡ್ಡತನ ಮೆರೆದಿದ್ದಾರೆ ಎಂದೇ ಹೇಳಲಾಗುತ್ತಿದೆ.

ವರದಿ : ನಿಂಪು ರಾಜೇಶ್

Releated Posts

ಕೊಳ್ಳೇಗಾಲದಲ್ಲಿ ವಾಲ್ಮೀಕಿ ಜಯಂತಿ ಅದ್ದೂರಿ ಮೆರವಣಿಗೆಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಚಾಲನೆ

ಕೊಳ್ಳೇಗಾಲ. ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿ ಅಂಗವಾಗಿ ಮಂಗಳವಾರ ಅದ್ದೂರಿಯಾಗಿ ಬೆಳ್ಳಿ ರಥ ಮೆರವಣಿಗೆ ನಡೆಯಿತು.ಪಟ್ಟಣದ ನಾಯಕರ ಬೀದಿಯಲ್ಲಿ ಅಲಂಕೃತಗೊಂಡಿದ್ದ ರಥದಲ್ಲಿದ್ದ ವಾಲ್ಮೀಕಿ ಭಾವಚಿತ್ರಕ್ಕೆ…

ByByN RajeshOct 7, 2025

ಶಾಸಕ ಎ.ಆರ್. ಕೃಷ್ಣಮೂರ್ತಿ ಅವರಿಗೆ ಸಚಿವರಾಗುವ ಅರ್ಹತೆ ಮತ್ತು ಸಾಮರ್ಥ್ಯ ಇದೆ – ಸಂಸದ ಸುನೀಲ್ ಬೋಸ್

ಕೊಳ್ಳೇಗಾಲ : ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರಿಗೆ ಸಚಿವರಾಗುವ ಅರ್ಹತೆ ಮತ್ತು ಸಾಮರ್ಥ್ಯ ಎರಡೂ ಇದೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸತ್‌…

ByByN RajeshOct 6, 2025

ಹುಲಿಗಳ ಸಾವಿನ ಸಮಗ್ರ ತನಿಖೆಗೆ ಶಾಸಕ ಎಂ.ಆರ್. ಮಂಜುನಾಥ್ ಒತ್ತಾಯ

ಹನೂರು : ತಾಲೂಕಿನ ಪಚ್ಚೆದೊಡ್ಡಿ ಅರಣ್ಯ ಪ್ರದೇಶದಲ್ಲಿ ಹುಲಿ ಸಾವನ್ನಪ್ಪಿರುವ ಬಗ್ಗೆ ಸರ್ಕಾರ ಗಂಭೀರವಾಗಿ ಪ್ರಕರಣವನ್ನು ಕೈಗೆತ್ತಿಕೊಂಡು ಸಂಬಂಧಿಸಿದ ಹಿರಿಯ ಅಧಿಕಾರಿಗಳ ತಂಡ ರಚನೆ…

ByByN RajeshOct 3, 2025

ಕೊಳ್ಳೇಗಾಲ ದಿಂದ ಅಂಬೇಡ್ಕರ್ ಧೀಕ್ಷಾ ಭುಮಿಗೆ ಹೊರಟ ವಾಹನಗಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಹಸಿರು ನಿಶಾನೆ

ಕೊಳ್ಳೇಗಾಲ ಸುದ್ದಿ ದೀಕ್ಷಾಭೂಮಿ ಯಾತ್ರೆಗೆ ಚಾಲನೆ ನೀಡಿದ ಶಾಸಕ ಎ. ಆರ್ ಕೃಷ್ಣಮೂರ್ತಿ ಡಾ. ಬಿ. ಆರ್. ಅಂಬೇಡ್ಕರ್ ರವರು ಲಕ್ಷಾಂತರ ಅನುಯಾಯಿಗಳೊಡನೆ ಬೌದ್ಧ…

ByByN RajeshSep 30, 2025

ಶಿಕ್ಷಣವೇ ಸಮಾಜದ ಬಹುಮುಖ್ಯ ಸುಧಾರಣೆ : ಮುರುಡೇಶ್ವರ ಸ್ವಾಮಿ

ಶಿಕ್ಷಣವೇ ಧರ್ಮ ಶಿಕ್ಷಣವೇ ಆಚಾರ ಶಿಕ್ಷಣವೇ ಸಮಾಜದ ಬಹು ಮುಖ್ಯ ಸುಧಾರಣೆ ಎಂದು ಸುತ್ತೂರು ಲಿಂಗೈಕ್ಯ ಶ್ರೀಗಳಾದ ರಾಜೇಂದ್ರ ಮಹಾಸ್ವಾಮಿಗಳು ಆರಂಭಿಸಿದ್ದ ಶಿಕ್ಷಣ ಕ್ರಾಂತಿಯೇ…

ByByN RajeshSep 19, 2025

ಅಜ್ಜೀಪುರ ಗ್ರಾಮ ಪಂಚಾಯತಿ ಕಚೇರಿ ಮುಂದೆ ಮುಳ್ಳು ಹಾಕಿ ಆಕ್ರೋಶ

ಹನೂರು : ಚರಂಡಿ ಸ್ವಚ್ಛತೆಗೊಳಿಸಿಲ್ಲ ಗುಂಡಿ ಬಿದ್ದ ರಸ್ತೆಗೆ ಮಣ್ಣು ಹಾಕಿಲ್ಲ ಎಂದು ಗ್ರಾಮದ ಮನ್ನಾದೇ ಗೌಡ ಎಂಬುವರು ಗ್ರಾಮ ಪಂಚಾಯಿತಿ ಕಚೇರಿಗೆ ಮುಳ್ಳು…

ByByN RajeshSep 19, 2025

ಕೊಳ್ಳೇಗಾಲ : ಸೆಸ್ಕ್ ಕಚೇರಿಯಲ್ಲಿ ಜನಸಂಪರ್ಕ ಸಭೆ

ಕೊಳ್ಳೇಗಾಲ : ಸೆಸ್ಕಾಂ ಕಚೇರಿಯಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಕೊಳ್ಳೇಗಾಲ ಉಪವಿಭಾಗ ಕಚೇರಿಯಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆಯನ್ನು ಆಯೋಜಿಸಲಾಗಿತ್ತು, ಸೆಸ್ಕಾಂ…

ByByN RajeshSep 16, 2025

ಕೊಳ್ಳೇಗಾಲ : ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಘಟಕ ಉದ್ಘಾಟನೆ

ಕೊಳ್ಳೇಗಾಲ ಸುದ್ದಿ ಕರವೇ ತಾಲ್ಲೂಕು ಘಟಕ ಉದ್ಘಾಟನೆ ಹಾಗೂ ಸೇರ್ಪಡೆ ಕಾರ್ಯಕ್ರಮ ಕರೆವೇ ಕೃಷ್ಣೆಗೌಡ ಬಣದ ಕರ್ನಾಟಕ ರಕ್ಷಣೆ ವೇದಿಕೆ ಸ್ವಾಭಿಮಾನ ಬಣ ಕಾರ್ಮಿಕ…

ByByN RajeshSep 15, 2025

Leave a Reply

Your email address will not be published. Required fields are marked *

Scroll to Top