/* Change button hover color to red */
button:hover,
.wp-block-button__link:hover,
input[type="submit"]:hover {
    background-color: red !important;
    color: #fff !important; /* Makes text white for contrast */
}

  • Home
  • ಜಿಲ್ಲೆ
  • ಕೊಳ್ಳೇಗಾಲದಲ್ಲಿ ಕುವೆಂಪು ಆಶಯದಂತೆ ನಡೆದ ಮದುವೆ
Image

ಕೊಳ್ಳೇಗಾಲದಲ್ಲಿ ಕುವೆಂಪು ಆಶಯದಂತೆ ನಡೆದ ಮದುವೆ

ಕೊಳ್ಳೇಗಾಲ. ಪಟ್ಟಣದ ಕನಕ ಸಮುದಾಯ ಭವನದಲ್ಲಿ ಭಾನುವಾರ ಕುವೆಂಪು ಮಂತ್ರ ಮಾಂಗಲ್ಯ ವಿಧಾನದಲ್ಲಿ ಮದುವೆ ಕಾರ್ಯ ನೆರವೇರಿತು.

ಯಳಂದೂರು ತಾಲ್ಲೂಕು ಗಣಿಗನೂರು ಗ್ರಾಮದ ಬೆಂಗಳೂರು ಕಂಪನಿಯೊಂದರ ಉದ್ಯೋಗಿ ಸೋಮಶೇಖರ್.ಎನ್ ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿನ ಪಿ.ಹೊಸಹಳ್ಳಿ ಪಂಚಾಯತ್ ಗ್ರಂಥಾಲಯ ಇಲಾಖೆ ಉದ್ಯೋಗಿ ಶಿಲ್ಪಾ.ಹೆಚ್.ಬಿ, ಅವರು ಕುವೆಂಪು ಮಂತ್ರ ಮಾಂಗಲ್ಯ ವಿಧಾನದಂತೆ ಮದುವೆಯಾದರು.

ಜಿಲ್ಲೆಯ ಹಿರಿಯ ಸಾಹಿತಿ ಶಂಕನಪುರ ಮಹದೇವ ರವರು ವಧುವರರಿಗೆ ಮಂತ್ರಮಾಂಗಲ್ಯದ ಪ್ರಮಾಣವಚನ ಮತ್ತು ವಿವಾಹ ಸಂಹಿತೆಯನ್ನು ಬೋಧಿಸಿದರು. ಅದಕ್ಕೂ ಮೊದಲು ಭಾರತದ ಸಂವಿಧಾನದ ಪೀಠಿಕೆಯನ್ನು ವಧು ವರರ ಸಮೇತ ನೇರೆದಿದ್ದ ಎಲ್ಲರಿಗೂ ಬೋಧಿಸಿದರು.
ಕುವೆಂಪು ವಿವಾಹ ಸಂಹಿತೆ 20 ಅಂಶಗಳನ್ನು ವಧು ವರರು ಅನುಸರಿಸಬೇಕೆಂದು ತಿಳಿಸಿದರು.

ಶಾಸ್ತ್ರ, ಪುರೋಹಿತ, ಗಂಟೆ ಘಳಿಕೆ ಮತ್ತು ಮುಹೂರ್ತ ಗಳನ್ನು ಲೆಕ್ಕಿಸದೇ ವೈಚಾರಿಕವಾದ ಕುವೆಂಪು ಮಂತ್ರ ಮಾಂಗಲ್ಯ ವಿಧಾನದಲ್ಲಿ ಮದುವೆ ನೆರವೇರಿತು.

ಕುವೆಂಪು ರವರು ರೂಪಿಸಿರುವ ಮಂತ್ರ ಮಾಂಗಲ್ಯ ವಿವಾಹ ಸಂಹಿತೆ ಜಾತಿ, ಮತ, ಧರ್ಮ, ಸಂಪ್ರದಾಯ ಮೂಢನಂಬಿಕೆಗಳನ್ನು ಮೀರಿ ಸಂವಿಧಾನದ ಪೀಠಿಕೆಯ ಆಶಾಯಗಳನ್ನೇ ಬೋಧಿಸುತ್ತದೆ.

ಬುದ್ಧ, ಬಸವ, ಅಂಬೇಡ್ಕರ್ ಮತ್ತು ಕುವೆಂಪು ರವರ ವಿಚಾರಗಳು ಈ ವಿವಾಹ ಸಂಹಿತೆಯಲ್ಲಿ ಅಡಕವಾಗಿವೆ ಎಂದರು.

ಇಂದಿನ ದುಬಾರಿ ವೆಚ್ಚದ ಮದುವೆಗಳು ಮತ್ತು ಆಡಂಬರದ ಅರ್ಥವಿಲ್ಲದ ಸಂಪ್ರದಾಯಗಳನ್ನು ಹೊರತು ಪಡಿಸಿ ಇಂತಹ ಮದುವೆಗಳು ಹೆಚ್ಚಾಗಿ ನಡೆಯಬೇಕೆಂದು ಮಹದೇವ ಶಂಕನಪುರ ಅವರು ತಿಳಿಸಿದರು.

ಮಾಂಗಲ್ಯ, ಅಕ್ಷತೆ, ಹೂವಿನ ದಳಗಳು ಇಷ್ಟೇ ಮದುವೆಯಲ್ಲಿ ಕಂಡು ಬಂದದ್ದು. ಹಿರಿಯರು ಮತ್ತು ಬಂಧುಮಿತ್ರರ ಹಾರೈಕೆಯಂತೆ ಕೆಲವೇ ಸಮಯದಲ್ಲಿ ಮದುವೆ ಅರ್ಥಪೂರ್ಣವಾಗಿ ನೆರವೇರಿತು.

ಈ ವಿವಾಹ ಕಾರ್ಯದಲ್ಲಿ ವಧು ವರರ ಕುಟುಂಬಸ್ಥರು, ಗಣಿಗನೂರು ಗ್ರಾಮ ಮತ್ತು ಪಿ.ಹೊಸಹಳ್ಳಿ ಗ್ರಾಮದ ಯಜಮಾನರು, ಸಾಹಿತಿ ಸುಂದರ್ ಕಲಿವೀರ, ವರನ ಸಹೋದರ ಚೇತನ್, ಯಜಮಾನ ರಘು, ಬಂಧುಮಿತ್ರರು ಹಾಜರಿದ್ದರು.

ಇದು ಕೊಳ್ಳೇಗಾಲ ಪರಿಸರದಲ್ಲಿ ಕುವೆಂಪು ಮಂತ್ರ ಮಾಂಗಲ್ಯ ವಿಧಾನ ಪ್ರಕಾರ ನಡೆದ ಮೊದಲ ಮದುವೆಯಾಗಿದ್ದು ಬಂದಿದ್ದ ವಧು ವರರ ಸಂಬಂಧಿಗಳು ಈ ಮಾದರಿಯಲ್ಲಿ ತಾವು ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳಿಗೂ ಈ ರೀತಿ ಸರಳ ಮದುವೆ ಮಾಡುವ ಅಶಯ ವ್ಯಕ್ತಪಡಿಸಿದರು. ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.

  • ನಿಂಪುವಾರ್ತೆ

Releated Posts

ಕೊಳ್ಳೇಗಾಲ: ಪೌರಕಾರ್ಮಿಕರಿಗೆ ಊಟ ಬಡಿಸಿದ ಶಾಸಕ ಎ.ಆರ್. ಕೃಷ್ಣಮೂರ್ತಿ

ಕೊಳ್ಳೇಗಾಲ. ಸಮಾಜದಲ್ಲಿ ಕೊಳಕು ಮುಕ್ತ ಪ್ರದೇಶವಾಗಲು ಪೌರಕಾರ್ಮಿಕರು ಮುಖ್ಯ ಕಾರಣವಾಗಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಹೇಳಿದರು. ಪಟ್ಟಣದ ಸಿಡಿಎಸ್ ಭವನದಲ್ಲಿ ಬುಧವಾರ ಪೌರ…

ByByN Rajesh Feb 11, 2026

ಕೊಳ್ಳೇಗಾಲ ನಗರಸಭೆ – ಜಿಲ್ಲಾಧಿಕಾರಿ ಶ್ರೀ ರೂಪ ಅವರಿಂದ ಉಳಿತಾಯ ಬಜೆಟ್ ಮಂಡನೆ

ಕೊಳ್ಳೇಗಾಲ ನಗರಸಭೆಯ ೨೦೨೬-೨೭ನೇ ಸಾಲಿನ ಬಜೆಟ್‌ನ ಪಕ್ಷಿ ನೋಟ ಕೊಳ್ಳೇಗಾಲ, ಫೆ, ೧೦- ಕೊಳ್ಳೇಗಾಲ ನಗರಸಭೆಯ ಸಭಾಂಗಣದಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿಯವರ ಅಧ್ಯಕ್ಷತೆಯಲ್ಲಿ ಫೆ.೧೦…

ByByN Rajesh Feb 10, 2026

ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕರ ಅಯ್ಕೆ

ಕೊಳ್ಳೇಗಾಲ. ಸತ್ತೇಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಿತು. ಗ್ರಾಮದಲ್ಲಿ ನಡೆದ ಚುನಾವಣೆಯಲ್ಲಿ 8…

ByByN Rajesh Feb 9, 2026

ಕೊಳ್ಳೇಗಾಲ : ಗ್ಯಾರೆಂಟಿ ಯೋಜನೆಗಳಿಂದ ನವ ಕರ್ನಾಟಕ ನಿರ್ಮಾಣ – ಶಾಸಕ ಎ.ಆರ್.ಕೃಷ್ಣಮೂರ್ತಿ

ಸರ್ಕಾರದ ಅಭಿವೃದ್ಧಿ ಯೋಜನೆ, ಕಾರ್ಯಕ್ರಮಗಳು ನವಕರ್ನಾಟಕ ನಿರ್ಮಾಣಕ್ಕೆ ಸಹಕಾರಿ: ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಕೊಳ್ಳೇಗಾಲ. ರಾಜ್ಯಸರ್ಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರ ಅಭಿವೃದ್ಧಿಗಾಗಿ…

ByByN Rajesh Jan 17, 2026

Leave a Reply

Your email address will not be published. Required fields are marked *

Scroll to Top