ಕೊಳ್ಳೇಗಾಲ. ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ರವರ ಸುಪುತ್ರ ಶ್ರೀವರ್ಧನ್ ರವರ 30 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಇಲ್ಲಿನ ದೊರೆ ಬೆಳಕು ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ಪುಸ್ತಕ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಆಚರಣೆ ಮಾಡಿದರು
ತಾಲ್ಲೂಕಿನ ಹೊಸ ಹಂಪಾಪುರ ಗ್ರಾಮದ ಸರ್ಕಾರಿ ಶಾಲೆಯ 72 ವಿದ್ಯಾರ್ಥಿಗಳಿಗೆ ಬುಧವಾರ ದೊರೆ ಬೆಳಕು ಚಾರಿಟಬಲ್ ಟ್ರಸ್ಟ್ ವತಿಯಿಂದ ಪುಸ್ತಕ, ಸಿಹಿ ನೀಡುವ ಮೂಲಕ ಶ್ರೀವರ್ಧನ್ ರವರ ಹುಟ್ಟುಹಬ್ಬ ವನ್ನು ಆಚರಿಸಿದರು.
ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಚೇತನ್ ಮಾತನಾಡಿ, ನಮ್ಮ ಕ್ಷೇತ್ರದ ಶಾಸಕರಾದ ಎ.ಆರ್.ಕೃಷ್ಣಮೂರ್ತಿ ರವರ ಸುಪುತ್ರರಾದ ಶ್ರೀವರ್ಧನ್ ರವರ ಹುಟ್ಟುಹಬ್ಬದ ಅಂಗವಾಗಿ ಇಂದು ಹೊಸ ಹಂಪಾಪುರ ಶಾಲೆಯ ಮಕ್ಕಳಿಗೆ ಪುಸ್ತಕ ಸಾಮಾಗ್ರಿಗಳನ್ನು ವಿತರಿಸಲಾಗುತ್ತಿದೆ. ಶ್ರೀವರ್ಧನ್ ರವರು ಕೂಡು ಅವರ ತಾತಾ ರಾಚಯ್ಯ ಹಾಗೂ ತಂದೆ ಎ.ಆರ್.ಕೆ ರವರ ರೀತಿಯಲ್ಲಿ ರಾಜಕೀಯ ಉನ್ನತ ಭವಿಷ್ಯ ಹೊಂದಲಿ ಎಂದು ಆರಿಸಿದರು.
ಈ ಸಂಧರ್ಭದಲ್ಲಿ ನಾಮನಿರ್ದೇಶನ ಸದಸ್ಯರು ಸ್ವಾಮಿ ನಂಜಪ್ಪ, ಆನಂದ್, ಅನ್ಸರ್ ಬೇಗ್, ಹರಳೆ ಗ್ರಾ.ಪಮ ಸದಸ್ಯರು ಶಿವಕುಮಾರ್, ಯುವಕಾಂಗ್ರೇಸ್ ಅಧ್ಯಕ್ಷ ಅಜಯ್, ಉಪಾಧ್ಯಕ್ಷರು ಸಂತೋಷ್, ಮಧುವನಹಳ್ಳಿ ಸಂಜಯ್, ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರು ಮಹೇಶ್, ಮುಖ್ಯ ಶಿಕ್ಷಕಿ ಸಾವಿತ್ರಿ ಹಾಗೂ ಇತರರು ಇದ್ದರು.
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.