
ವರದಿ – ಎನ್. ಸುರೇಶ್
ಕೊಳ್ಳೇಗಾಲ. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಎಸ್ಇಪಿ ಮತ್ತು ಟಿಎಸ್ಪಿ ಯೋಜನೆಯಡಿ 75 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಚಾಲನೆ ನೀಡಿದರು.
ತಾಲ್ಲೂಕಿನ ಕುಣಗಳ್ಳಿ ಗ್ರಾಮದಲ್ಲಿ 10 ಲಕ್ಷ ವೆಚ್ಚದ ರಸ್ತೆ- ಚರಂಡಿ ಕಾಮಗಾರಿ ಮತ್ತು ಅಂಬೇಡ್ಕರ್ ಭವನದಲ್ಲಿ 10 ಲಕ್ಷ ವೆಚ್ಚದ ಮಳಿಗೆ ನಿರ್ಮಾಣ ಕಾಮಗಾರಿ, ಲಕ್ಕರಸಪಾಳ್ಯ ಗ್ರಾಮದಲ್ಲಿ 15 ಲಕ್ಷ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ, ಹರಳೆ ಗ್ರಾಮದಲ್ಲಿ 20 ಲಕ್ಷ ವೆಚ್ಚದ ರಸ್ತೆ ಚರಂಡಿ ಕಾಮಗಾರಿ ಹಾಗೂ ಮುಳ್ಳೂರು 20 ಲಕ್ಷ ವೆಚ್ಚದ ರಸ್ತೆ ಚರಂಡಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನಡೆಸಿದರು.
ಈ ಸಂಧರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅಧ್ಯಕ್ಷರು ರಾಜೇಂದ್ರ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ತೋಟೇಶ್,
ಸಿದ್ದಯ್ಯನಪುರ ಗ್ರಾ.ಪಂ ಅಧ್ಯಕ್ಷರು ಶಾಂತಮ್ಮ, ಸದಸ್ಯರು ಪಿಡಿಒ ಜುನೈದ್ ಅಹಮದ್,
ಹರಳೆ ಗ್ರಾ.ಪಂ ಅಧ್ಯಕ್ಷರು ನಾಗರಾಜು, ಸದಸ್ಯರು,
ಮುಳ್ಳೂರು ಗ್ರಾ.ಪಮ ಅಧ್ಯಕ್ಷ ಕಮಲಮ್ಮ, ಉಪಾಧ್ಯಕ್ಷರು ದೊರೆರಾಜು, ಪಿಡಿಒ ರಾಜಮ್ಮಣಿ, ಕೆ.ಆರ್.ಐ.ಡಿ.ಎಲ್ ಎಇಇ ಚಿಕ್ಕಲಿಂಗಯ್ಯ, ನಿರ್ಮಿತಿ ಕೇಂದ್ರದ ಪ್ರತಾಪ್ ಹಾಗೂ ಇತರರು ಇದ್ದರು.
![/* Change button hover color to red */
button:hover,
.wp-block-button__link:hover,
input[type="submit"]:hover {
background-color: red !important;
color: #fff !important; /* Makes text white for contrast */
}](https://rapower28.com/wp-content/uploads/2025/08/WhatsApp-Image-2025-08-23-at-7.28.55-AM-2-1024x454.jpeg)













