/* Change button hover color to red */
button:hover,
.wp-block-button__link:hover,
input[type="submit"]:hover {
    background-color: red !important;
    color: #fff !important; /* Makes text white for contrast */
}

  • Home
  • ಸಾಹಿತ್ಯ
  • ಓವರ್ ಟೂರಿಸಂ….ಖ್ಯಾತ ಬರಹಗಾರ್ತಿ ರಶ್ಮಿ ಕೆ ವಿಶ್ವನಾಥ್ ಅವರ ಕಿರುಲೇಖನ
Image

ಓವರ್ ಟೂರಿಸಂ….ಖ್ಯಾತ ಬರಹಗಾರ್ತಿ ರಶ್ಮಿ ಕೆ ವಿಶ್ವನಾಥ್ ಅವರ ಕಿರುಲೇಖನ

ಪ್ರವಾಸಾತಿರೇಕ (ಓವರ್ ಟೂರಿಸಂ)

ಪ್ರವಾಸ ಬೇಕಾ? ಹೌದು ಬೇಕೇ ಬೇಕು. ‘ಕೋಶ ಓದಿ ನೋಡು, ದೇಶ ಸುತ್ತಿ ನೋಡು’ ಅಂತ ಅಷ್ಟಿಲ್ಲದೇ ಹೇಳ್ತಾರಾ? ನಮ್ಮ ದೇಶವನ್ನು ಮೊದಲು ಸುತ್ತಿನೋಡಬೇಕು ನಂತರ ಇತರ ದೇಶಗಳನ್ನು ಸಾಧ್ಯವಾದರೆ ಸುತ್ತಿಬಿಡಬೇಕು. ಆದರೆ.. ಆದರೆ…
ಸನ್ಯಾಸಿಗಳು ಎಷ್ಟಾದರೂ ಸುತ್ತಿಕೊಳ್ಳಲಿ, ಸಂಸಾರಿಗಳಿಗೆ ಕುಟುಂಬದ ಕಡೆಗೂ ತುಸು ಗಮನವಿರಲಿ.

ಕೆಲವು ಜನರು ಊಟಕ್ಕೆ ಉಪ್ಪಿನಕಾಯಿ ತಿನ್ರಪ್ಪ ಎಂದರೆ, ಉಪ್ಪಿನಕಾಯಿಯನ್ನೇ ಊಟದ ರೀತಿ ತಿಂತಾರೆ.
ಪ್ರವಾಸ ಜೀವನದ ಒಂದು ಭಾಗವಾಗಬೇಕೇ ಹೊರತು, ಜೀವನ ಪ್ರವಾಸದ ಒಂದು ಭಾಗವಾಗಬಾರದು.

ಕೆಲವರಿಗೆ ಅದೇನೋ ಹುಚ್ಚಪ್ಪ ಒಂದು ಬ್ಯಾಗು ನೇತುಹಾಕಿಕೊಂಡು ಹೊರಟುಬಿಡ್ತಾರೆ. ಮನೆ ಇಲ್ಲ ಮಠ ಇಲ್ಲ ಮನೆಯವರ ಯೋಚನೆ ಮೊದಲೇ ಇಲ್ಲ. ಹೊರಗಿನ ಪ್ರಪಂಚ ತಿಳಿಯುವ ಆಸಕ್ತಿ ಅಥವಾ ಒಳಗಿನ ಅಸಮಾಧಾನ ಮರೆಯುವ ಆತುರ ಎರಡೂ ಕಾರಣಗಳಿಂದಲೂ ಮನ ಪ್ರವಾಸದ ಕಡೆ ಎಳೆಯಬಹುದು. ಹೌದು ದೇಹ ಎಲ್ಲಿಗೆ ಬೇಕಾದರೂ ಹೋಗಬಹುದು ರೀ, ಆದರೆ ಮನಸ್ಸು ಕ್ಷಣ ಮಾತ್ರಕ್ಕಾದರೂ ನಮ್ಮವರ, ನಮ್ಮೂರ ಸುತ್ತಿಬರುವುದಾ ಮರೆಯುವುದೇ? ಕೊನೆಗೆ ಸೇರುವ, ಇರುವ, ಇರಬೇಕಾದ ಜಾಗ ಕೂಡ ಅದೇ ಅಲ್ಲವೇ? ಹಾಗಾಗಿ ಪ್ರಯಾಸದ ಪ್ರವಾಸ ಬೇಡ, ಪ್ರಶಂಸೆಯ ಹಿತಕರ ಪ್ರವಾಸವಿರಲಿ.

ಮತ್ಯಾರೋ ಹೋಗುತ್ತಾರೆಂದೋ, ಯಾರ ಮುಂದೆಯೋ ಕೊಚ್ಚಿಕೊಳ್ಳಬೇಕೆಂದೋ ಪ್ರವಾಸ ಹೋಗುವುದರ ಬದಲಿಗೆ, ನಮ್ಮಿಚ್ಚಗೆ – ನಮ್ಮ ವೆಚ್ಚಕ್ಕೆ ಸರಿ ಹೊಂದುವ, ಪ್ರವಾಸ ನಮ್ಮದಾಗಿರಲಿ. ಮೊದಲಿಗೆ ನಮ್ಮ, ನಮ್ಮ ಸುತ್ತ -ಮುತ್ತಲ ಪ್ರದೇಶಗಳ ಬಗ್ಗೆ ತಿಳಿದುಕೊಂಡು, ನಂತರ ಇತರೆ ಪ್ರದೇಶಗಳ ಬಗ್ಗೆ ತಿಳಿಯಲು ಪ್ರಯತ್ನಿಸೋಣ. ಆಹ್ಲಾದಕರ ಪ್ರವಾಸ ಪ್ರಸನ್ನತೆಯನ್ನು ತರಲಿ ದೇಹಕ್ಕೂ ಮನಸ್ಸಿಗು.

✍🏻 ರಶ್ಮಿ ಕೆ. ವಿಶ್ವನಾಥ್
ಮೈಸೂರು

Releated Posts

ಬಾಲ್ಯದ ಆಟ…ಆ ಹುಡುಗಾಟ..ಲೇಖಕಿ ರಶ್ಮಿ ಕೆ. ವಿಶ್ವನಾಥ್ ಅವರ ಲೇಖನ

ಬಾಲ್ಯದ ಆಟ…… ಆ ಹುಡುಗಾಟ ನನ್ನ ಬಾಲ್ಯದ ನೆನಪುಗಳು ಲೆಕ್ಕವಿಲ್ಲದಷ್ಟು. ಆದರೆ ಈಗಿನ ಮಕ್ಕಳಿಗೆ ಆ ಪುಣ್ಯವಿಲ್ಲ ಎನ್ನಬಹುದು. ಅದಕ್ಕೆ ಕಾರಣ ಪೋಷಕರೂ ಸಹ…

ByByN RajeshSep 15, 2025

ಲೆಕ್ಕಾಚಾರವೇ ಇಲ್ಲಿ….ಯುವ ಸಾಹಿತಿ ಕೆ.ಅನುರಾಧ ಸಿಂಗನಲ್ಲೂರು ಅವರ ಲೇಖನ

ಲೆಕ್ಕಾಚಾರವೇ ಇಲ್ಲಿ ನಮ್ಮದು ವೈವಿಧ್ಯಮಯ ದೇಶಹೇಳಲು ಎಷ್ಟೊಂದು ಸೊಗಸುಹೇಳಿದವರೆಷ್ಟೊ ಕೇಳಿದವರೆಷ್ಟೋ…ಆದ್ರೆನೂ ಬಂತು ಪ್ರಯೋಜನಉಳ್ಳವರು ಮನಬಂದಂತೆ ಕುಣಿಯುವಾಗಇಲ್ಲದವರು ಕೈ ಕಟ್ಟಿ ಕಣ್ಣು ಮುಚ್ಚಿಕುಳಿತುಕೊಳ್ಳುವರಾ….?ಧರ್ಮ-ಧರ್ಮದೊಳಗೆ ನೊಕಿಧರ್ಮವನ್ನು ಜಾತಿ…

ByByN RajeshSep 7, 2025

ನಾವು ಮತ್ತು ನಮ್ಮ ಟೀಚರ್ – ಯುವ ಸಾಹಿತಿ ರಶ್ಮಿ ಕೆ. ವಿಶ್ವನಾಥ್ ಅವರ ಅರ್ಥಪೂರ್ಣ ಲೇಖನ

ನಾವು ಮತ್ತು ನಮ್ಮ ಟೀಚರು 🤓ನಾ 7th ಓದುವಾಗ ಮೊದಲ ಗಣಿತ ಟೆಸ್ಟ್. ಏನಿಲ್ಲ 25 ಅಂಕಗಳ ಟೆಸ್ಟಿಗೆ ಪೂರಾ 25 ಸೊನ್ನೆ ತಗೊಂಡಿದ್ದೆ.…

ByByN RajeshSep 6, 2025

ಈ ಭೂಮಿ ನಮ್ನದು…ಲೇಖಕಿ…ಕವಿಯಿತ್ರಿ.. .ರಶ್ಮಿ ವಿಶ್ವನಾಥ್ ಅವರ ಲೇಖನ

ಈ ಭೂಮಿ ನಮ್ಮದು… ಈ ಭೂಮಿ ನಮ್ಮದು, ಆಕಾಶವು ಕೂಡ. ಭೂಮಿಯಲ್ಲಿ ಅಂತರ್ಜಲ ಉಳಿಸಿಕೊಳ್ಳಬೇಕು, ಆಕಾಶದಲ್ಲಿ ಓಜೋನ್ ಪದರ ಕಾಪಾಡಿಕೊಳ್ಳಬೇಕು. ಮಗು ಚಿಕ್ಕದಿದ್ದಾಗ ಅಮ್ಮನನ್ನು…

ByByN RajeshSep 1, 2025

Leave a Reply

Your email address will not be published. Required fields are marked *

Scroll to Top